ಅವಳದಿನ್ನೂ ಮಗುವಿನ ಮನಸು. ಅದಕ್ಕೆ ಪ್ರೀತಿ ಪ್ರೇಮ ಎಲ್ಲಿ ಗೊತ್ತಾಗುತ್ತೆ ಹೇಳು. ಅದಕ್ಕೇ ಅವಳಿಗೆ ಪ್ರೇಮಿಗಳ ಆರಾಧ್ಯ ದೈವ ಶ್ರೀಕೃಷ್ಣನ ಪ್ರೀತಿಯನ್ನು ಕತೆಯಾಗಿಸಿ ಹೇಳುತ್ತೇನೆ. ಅವಳು ಕಿವಿಯಾಗುತ್ತಾಳೆ. ಆ ಕತೆಯನ್ನು ಹೇಳುವಾಗ ಮನಸು ಹಗುರಾಗುತ್ತೆ. ಆದರೆ ಕೃಷ್ಣ ರಾಧೆಯರ ಪ್ರೀತಿ ಪರ್ಯಾವಸಾನ ಹೇಗೆ ಹೇಳಲಿ ನಾನು. ಕತೆ ಕೇಳುತ್ತಾ ಅವಳು ನಿದ್ದೆ ಹೋಗಿರುತ್ತಾಳೆ. ಆದರೆ ಮನಸ್ಸಲ್ಲಿ ಅದೇ ರಾಧಾಕೃಷ್ಣರ ವಿಫಲ ಪ್ರೇಮದ ಕತೆ ಕಣ್ಣಮುಂದೆ ಹಾದು ಹೋಗುತ್ತೆ. ನೀವು ಕೊಟ್ಟ ಪ್ರೀತಿಯನ್ನು ನೆನೆಯುತ್ತಾ ಆ ಜೋಡಿಯ ಅಗಲಿಕೆಯನ್ನು ಯೋಚಿಸಬೇಕಾದರೆ ದುಃಖ ಉಮ್ಮಳಿಸಿ ಬರುತ್ತದೆ. ಕಣ್ಣಂಚಲ್ಲಿ ನೀರು.
ಮರುದಿನ ರಾತ್ರಿಯಾಗುವ ವೇಳೆಗೆ ಮತ್ತೆ ನನ್ನ ಕೇಳುತ್ತಾಳೆ. ನಾನು ಅದೇ ಸುಂದರ ದಿನಗಳನ್ನು ಹೇಳುತ್ತಾ ಸಾಗುತ್ತೇನೆ. ಆದರೂ ಮನಸ್ಸಲ್ಲಿ ನೋವು ಕಾಡುತ್ತಾ ಇರುತ್ತೆ.
ಹಾಗೆ ಕಣ್ಣೀರು ತಲೆದಿಂಬನ್ನು ಒದ್ದೆ ಮಾಡಿದಾಗಲೂ ನಾನು ನೀವು ಕಟ್ಟುವ ಆ ಮಾಂಗಲ್ಯಸೂತ್ರದಲ್ಲಿ ಬಂಧಿಯಾಗುವ ಕನಸು ಕಾಣುತ್ತೇನೆ. ಹೇಳಿ ಕೇಳಿ ನನ್ನದು ಹುಚ್ಚು ಮನಸು. ಎಲ್ಲಾ ನನ್ನದೇ ಆಯಿತು. ನಿಮ್ಮ ವಿಶೇಷ ಏನಾದ್ರೂ ಇದ್ದರೆ ಹೇಳಿ.
ನಿಮ್ಮವಳು