Wednesday, September 30, 2009

ನನಗೊ ನೀನು ಕೃಷ್ಣನ ತೋರುವ ಕಣ್ಣು...!

ಚೆಂದುಳ್ಳಿ ಚೆಲುವೆ,

ನಿನ್ನ ಕೈಗೆ ತಲುಪಿಸಬೇಕು ಎನ್ನುವ ಆಸೆ ಹೊತ್ತು ಬರೆಯುತ್ತಿರುವ ೨೪ನೆಯ ಪತ್ರವಿದು. ಇದುವರೆಗೆ ಬರೆದ ೨೩ ಪತ್ರಗಳು ಆಗಲೇ ಕಸದ ಬುಟ್ಟಿಗೆ ಸೇರಿಯಾಗಿದೆ. ಇದೂ ಅಲ್ಲಿಗೆ ಸೇರದೆ ನಿನ್ನ ಕೈ ಸೇರುವ ಭರವಸೆಯೊಂದಿಗೆ ಈ ಪತ್ರ ಆರಂಭಿಸಿದ್ದೇನೆ.
ಮೊದಲ ಅಕ್ಷರ ಬರೆಯುವ ಹೊತ್ತಿಗೆ ನೀನು ಕಣ್ಣ ಮುಂದೆ ಬಂದಿದ್ದೆ..

ಭಲೆ ಭಲೆ ಚೆಂದದ ಚೆಂದುಳ್ಳಿ ಚೆಲುವೆ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

ಎಂಥ ಚೆಂದನೆಯ ಸಾಲುಗಳು. ನನ್ನ ಪಾಲಿಗೆ ಈ ಸಾಲುಗಳು ನಿನ್ನ ರೂಪದಲ್ಲಿ ಒದಗಿ ಬಂದು ನಿಜವಾಗಿ ಬಿಟ್ಟಿದೆ.
ಕಾಲೇಜು ಆರಂಭವಾಗಿ ತಿಂಗಳು ನಾಲ್ಕು ಕಳೆದು ಬಿಟ್ಟಿವೆ. ಕ್ಲಾಸು ಶುರುವಾಗಿ ತಿಂಗಳೊಪ್ಪತ್ತಿನಲ್ಲಿಯೇ ಎಲ್ಲರ ಪ್ರತಿಭಾ ಪ್ರದರ್ಶನದ ಕಾಲ. ಅದ್ಯಾವುದೋ ಘಳಿಗೇಲಿ ನೀನು ವೇದಿಕೆ ಏರಿ ಬಿಟ್ಟಿದ್ದೆ. ನಿನ್ನ ಮಧುರ ಕಂಠದಿಂದ ಹೊಮ್ಮಿತ್ತು ಸುಶ್ರಾವ್ಯ ಸಾಲುಗಳು. ಅದಾಗಲೇ ಹೃದಯ ಫುಲ್ ಫಿದಾ. ಆಗಿನಿಂದಲೇ ಕಣ್ಣುಗಳು ನಿನ್ನ ಹುಡುಕಾಟದಲ್ಲಿ ತೊಡಗಿದ್ದವು. ಆದರೆ ನೀನು ಮತ್ತೆ ಕಾಲಿಗೆ ಗೆಜ್ಜೆ ಜೋಡಿಸಿ ಬಂದಿದ್ದೆ.

ಕೃಷ್ಣ ರಾಧೆಯರ ಪ್ರೇಮ ಸನ್ನಿವೇಶವನ್ನು ಬಲು ಸೊಗಸಾಗಿ ಕಣ್ಣಿಗೆ ಕಟ್ಟುವಂತೆ ತೋರಿಸಿದ್ದೆ. ನನ್ನಲ್ಲಾಗಲೇ ನಿನ್ನ ಪಾಲಿನ ಕೃಷ್ಣನಾಗುವ ಕನಸು. ಕ್ಷಣದಲ್ಲೇ ಈ ಹುಡುಗಿ ನನ್ನವಳು ಎಂಬ ಭಾವ. ಆದರೆ ಈ ವಿಷಯವನ್ನು ನಿನ್ನ ಮುಂದೆ ನೇರವಾಗಿ ಹೇಳಲು ಇನ್ನೂ ಕಾಲ ಕೂಡಿ ಬಂದಿಲ್ಲ. ಆದರೆ ಆ ದಿನ ಬರುವಾಗ ಈ ಪತ್ರ ನಿನ್ನ ಕೈ ಸೇರಿರುತ್ತೆ. ಸದ್ಯಕ್ಕಿಷ್ಟು ಸಾಕು ಕಣೇ.

ಚೆಂದುಳ್ಳಿ ಚೆಲುವೆಗೆ ಮನ ಸೋತವ

No comments: